ಭಾನುವಾರ, ಅಕ್ಟೋಬರ್ 13, 2013

ದ್ವೇಷ..

ದ್ವೇಷ

ಧಗ ಧಗನೆ ಉರಿವ ದ್ವೆಷದ ಜ್ವಾಲೆ
ಸುಡುತಿಹುದು ಮನಸಿನ ಭಾವಶಾಲೆ
ಸುಖವೆಲ್ಲಿಯದು ಬರಡು ಜಗದೊಳಗೆ
ಅರಿಯದ ಸಂಶಯದ ಕಣ್ಣು ಎದೆಯ ಗೂಡು

ಮುಸ್ಸಂಜೆ ಮುಸುಕುವ ಬಹು ಮುನ್ನ
ಪಡುವಣದಿ ಮುಳುಗಿಹೋದನು ಸೂರ್ಯ..?!!
ಕತ್ತಲಡರಿದರು ತಾರೆಗಳ ಸುಳಿವಿಲ್ಲ
ತಂಪು ತಿಂಗಳನೆಲ್ಲೊ ಕಳೆದು ಹೋದನಲ್ಲಿ...?!!!

ಹತ್ತಾರು ಆಸೆಗಳು,ಆಕಾಂಕ್ಷೆ ಮೂಟೆಗಳು
ಬಂದಿಯಾಗಿಹುದು ಮನಸಿನ ಮೂಲೆಯಲ್ಲಿ..!!!
ಚಿಂತನೆಯ ಬಾಯಿಗೆ ಜಡಿದಿರಲು ಬೀಗ
ಮನಸು ವಿಕ್ಷುಬ್ದ,ಅಲ್ಲಿ ನಡೆದಿತ್ತೆ ಕುರುಕ್ಷೇತ್ರ ಯುದ್ಧ...!!!

ಕಣ್ಣೀರ ಮರೆತು ಮನಸದು ಒಣಗಿಹುದು
ಮರಳ ರಾಶಿಯಲಿ ಬತ್ತಿಹೋಗಿಹುದು ಕನಸು..?!!
ಹೃದಯ ಕಲ್ಲಾಗಿಹುದೆ..,ಇಲ್ಲ ಮರಳಾಗಿಹುದೆ
ವಿಪ್ಲವತೆಯಲಿ ಹೊರಳಿ ವಿವೇಕ ಕೊರಗಿಹುದು..!!!

ಮಗುವಿನ ಮುಗ್ದ ಮನಸೂ ಕಲುಷಿತ
ಗಾಳಿಯೆ ಹಾಳಾಗಿಹುದೆ? ಇಲ್ಲ ಉಸಿರೇ..?
ರಕ್ತದ ಕಣಕಣದಲು ಉರಿಯುವ ಬೆಂಕಿ
ಸತ್ತು ಬಿದ್ದಿದ್ದು ಮಾನವಾತ್ಮದ ಸಿರಿಮಡಿಲು...!!!

ಅಜ್ಞಾತ ಮಾನವ