ನೂರೆಂಟು ಸಾಲು
ಅರಿಯದ ಸಾಗರದ ಆಳ
ವಿಶಾಲ ಬಾನಿನ ವೈಚಿತ್ರ
ಮಿನುಗುತಿಹ ಸಹಸ್ರಾರು ತಾರೆ
ಹೊಳೆಯುತಿಹ ದೀಪದ ಭ್ರಾಂತಿ
ಭೂತ ಭವಿಷ್ಯತ್ತಿನ ಸುಂಟರಗಾಳಿ
ನಭೋ ಮಂಡಲದಿ ವರ್ತಮಾನ
ಸುತ್ತ ಮುಸುಕಿದ ಮಂಜಿನ ತೆರೆ
ಬೇರಾಗಿಹ ಬಾಂದಳ- ಧರಿತ್ರಿ..
ಕೈಹಿಡಿದು ನಡೆಸಿದ ಪ್ರೀತಿ
ಮಸಣದಲಿ ಗೋರಿಯ ಕೆಳಗೆ
ಛಿದ್ರ ವಿಚ್ಛಿದ್ರ ಬದುಕಿನ ಗಾಲಿ
ನೊಗ ಹೊತ್ತ ಎತ್ತು ಹೊಡೆದು ಜೋಲಿ
ನೀರಿನಲಿ ಮೀನಿನ ಹೆಜ್ಜೆಯ ಜಾಡು
ಅರಿಯದ ತಳಮಳ,ತಾಕಲಾಟ
ನಿಶೆಯೊಳಗಿನ ಕನಸಿನ ಕನ್ನಡಿ
ಸ್ಥಬ್ದ, ಅಲ್ಲ, ಚೂರು ಚೂರು..!!
ಅರ್ಥವಿಲ್ಲದ ನೂರೆಂಟು ಸಾಲು
ನಡುನಡುವೆ ಮೌನದ ಮಾತು..
ಎದೆ ಬಗೆವ ಭಾವದ ಮಾಲೆ
ಸುಟ್ಟು ಕರಟಿಸುತಿಹ ನೆನಪ ದಿವ್ಯಜ್ವಾಲೆ..!!
ಮುಚ್ಚಿದ ರೆಪ್ಪೆಗಳ ಕೆಳಗೆ
ಅತ್ತಿತ್ತ ಸರಿದಾಡುವ ಜೋಡಿ ಕಣ್ಣು
ಕಾಣಿಸದ ಕತ್ತಲ ಲೋಕದಲೂ
ಬದುಕ ಹುಡುಕುವ ವ್ಯರ್ಥ ಹಮ್ಮು..!!!
ಅರಿಯದ ಸಹಸ್ರಾರು ಉಕ್ತಿಗಳು
ತಿಳಿಯದ ಮನಸಿನ ವೇದನೆ
ಆರ್ದ್ರ ಆರ್ತನಾದದ ಬದುಕು
ಕಳೆದು ಹೋದದ್ದು ಒಂದು ಅಪೂರ್ವ ಮುತ್ತು...!!!
ಅಜ್ಞಾತಮಾನವ
ಅರಿಯದ ಸಾಗರದ ಆಳ
ವಿಶಾಲ ಬಾನಿನ ವೈಚಿತ್ರ
ಮಿನುಗುತಿಹ ಸಹಸ್ರಾರು ತಾರೆ
ಹೊಳೆಯುತಿಹ ದೀಪದ ಭ್ರಾಂತಿ
ಭೂತ ಭವಿಷ್ಯತ್ತಿನ ಸುಂಟರಗಾಳಿ
ನಭೋ ಮಂಡಲದಿ ವರ್ತಮಾನ
ಸುತ್ತ ಮುಸುಕಿದ ಮಂಜಿನ ತೆರೆ
ಬೇರಾಗಿಹ ಬಾಂದಳ- ಧರಿತ್ರಿ..
ಕೈಹಿಡಿದು ನಡೆಸಿದ ಪ್ರೀತಿ
ಮಸಣದಲಿ ಗೋರಿಯ ಕೆಳಗೆ
ಛಿದ್ರ ವಿಚ್ಛಿದ್ರ ಬದುಕಿನ ಗಾಲಿ
ನೊಗ ಹೊತ್ತ ಎತ್ತು ಹೊಡೆದು ಜೋಲಿ
ನೀರಿನಲಿ ಮೀನಿನ ಹೆಜ್ಜೆಯ ಜಾಡು
ಅರಿಯದ ತಳಮಳ,ತಾಕಲಾಟ
ನಿಶೆಯೊಳಗಿನ ಕನಸಿನ ಕನ್ನಡಿ
ಸ್ಥಬ್ದ, ಅಲ್ಲ, ಚೂರು ಚೂರು..!!
ಅರ್ಥವಿಲ್ಲದ ನೂರೆಂಟು ಸಾಲು
ನಡುನಡುವೆ ಮೌನದ ಮಾತು..
ಎದೆ ಬಗೆವ ಭಾವದ ಮಾಲೆ
ಸುಟ್ಟು ಕರಟಿಸುತಿಹ ನೆನಪ ದಿವ್ಯಜ್ವಾಲೆ..!!
ಮುಚ್ಚಿದ ರೆಪ್ಪೆಗಳ ಕೆಳಗೆ
ಅತ್ತಿತ್ತ ಸರಿದಾಡುವ ಜೋಡಿ ಕಣ್ಣು
ಕಾಣಿಸದ ಕತ್ತಲ ಲೋಕದಲೂ
ಬದುಕ ಹುಡುಕುವ ವ್ಯರ್ಥ ಹಮ್ಮು..!!!
ಅರಿಯದ ಸಹಸ್ರಾರು ಉಕ್ತಿಗಳು
ತಿಳಿಯದ ಮನಸಿನ ವೇದನೆ
ಆರ್ದ್ರ ಆರ್ತನಾದದ ಬದುಕು
ಕಳೆದು ಹೋದದ್ದು ಒಂದು ಅಪೂರ್ವ ಮುತ್ತು...!!!
ಅಜ್ಞಾತಮಾನವ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ